ಕಿಚ್ಚ ಸುದೀಪ್ ಮೆಚ್ಚಿದ ಬಾವ ರಂಜಿತ್ ರಾಧಕೃಷನ್ ಅವರ ಕೃತಿ
ಸ್ಯಾಂಡಲ್ ವುಡ್ ಬಾದ್ಷಾ ಕಿಚ್ಚ ಸುದೀಪ್ ಅವರ ಬಾವ “ರಂಜಿತ್ ರಾಧಕೃಷ್ಣನ್” ಬರೆದಿರುವ “ಅಂಶ” ಪರಶುರಾಮನ ಶೌರ್ಯಗಾಧೆ ಎಂಬ ಶ್ರೇಷ್ಠವಾದ ಕೃತಿಯು ಇದೇ ಕನ್ನಡ ರಾಜೋತ್ಸವ ದಿನದಂದು ಬಿಡುಗಡೆ ಆಗಿದ್ದು, ನಮ್ಮ ಕಿಚ್ಚ ಸುದೀಪ್ ಅವರು ರಂಜಿತ್ ರಾಧಕೃಷ್ಣನ್ ಅವರು ಬರೆದಿರುವ ಕೃತಿಯನ್ನು ಮೆಚ್ಚಿಕೊಂಡಿದ್ದಾರೆ.

ಇಂದಿನ ಆಧುನಿಕ ಜೀವನದಲ್ಲಿ ನಮ್ಮ ಪುರಾಣದ ರೇಣುಕಾ ಜಮದಗ್ನಿ- ಪರಶುರಾಮರ ಕಥೆಗಳನ್ನು ಓದುವವರು ತುಂಬಾ ಕಡಿಮೆ. ಪುರಾಣದ ಕಥೆಗಳು ಭಕ್ತಿಯ ದೃಷ್ಠಿಯಿಂದ ಪುನರ್ ಪಠಣವಾಗುವ ಜೊತೆಗೆ ಮತ್ತೊಮ್ಮೆ ಮನನ ಮಾಡುವುದು ಈ ನೆಲದ ಶಕ್ತಿ. ಈ ಕೃತಿಯಿಂದ ಅದು ಆಗುತ್ತಿದೆ ಅನ್ನೋದು ವಿಶೇಷ.
ನಿಮ್ಮ ಪ್ರತಿ ಅನ್ನು ಅಮೆಜಾನ್ ನಲ್ಲಿ 20ನೇ ನವೆಂಬರ್ ನಿಂದ ಕಾಯ್ದಿರಿಸಬಹುದು.