Skip to content
Home » ಡಿ ಕೆ ಸುರೇಶ್‌ ಪರ ಮತಯಾಚನೆ

ಡಿ ಕೆ ಸುರೇಶ್‌ ಪರ ಮತಯಾಚನೆ

ಕನಕಪುರ : ರಾಜ್ಯದಲ್ಲೇ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಭರದಿಂದ ನಡೆಯುತ್ತಿದೆ. ಸಾತನೂರು ಹೋಬಳಿಯ ಕೆಮ್ಮಾಳೆ ಗ್ರಾಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಹೆಚ್‌ ಕೆ ಶ್ರೀಕಂಠು ಹಾಗೂ ಕಾಂಗ್ರೆಸ್‌ ಮುಖಂಡರಾದ ಜಯರಾಮಣ್ಣ ಜೊತೆಗೆ ಕಾರ್ಯಕರ್ತರು ಸೇರಿ ಡಿ ಕೆ ಸುರೇಶ್‌ ಪರ ಮತಯಾಚನೆ ಮಾಡಿದರು.
ಶ್ರೀಕಂಠು ಅವರು ಗ್ರಾಮದ ಜನರೊಂದಿಗೆ ಸಭೆಯನ್ನು ನಡೆಸಿ ಡಿ ಕೆ ಸುರೇಶ್‌ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿದರು.